ಬ್ರೇಕಿಂಗ್
Ad
GREEN VALLEY INTERNATIONAL SCHOOL
ಬ್ರೇಕಿಂಗ್ರಾಜ್ಯ

1.52 ಲಕ್ಷ ‘ಸ್ಥಳಾಂತರಿತ’, 59 ಸಾವಿರಕ್ಕೂ ಹೆಚ್ಚು ‘ಗೈರು’ – ವಿಜಯಪುರ ನಗರ ಕ್ಷೇತ್ರವೊಂದರಲ್ಲೇ 79,737 ಮತದಾರರು ಹೊರಗುಳಿದಿರುವುದಕ್ಕೆ ಆಕ್ಷೇಪ

ವಿಜಯಪುರ ಜಿಲ್ಲೆಯಲ್ಲಿ SIR ಪರಿಷ್ಕರಣೆಯ ವೇಳೆ ಸುಮಾರು 2.97 ಲಕ್ಷ ಮತದಾರರು ಕರಡು ಪಟ್ಟಿಯಿಂದ ಹೊರಗುಳಿದಿರುವುದು ಆತಂಕಕ್ಕೆ ಕಾರಣವಾಗಿದೆ. ಇವರಲ್ಲಿ 1.52 ಲಕ್ಷಕ್ಕೂ ಹೆಚ್ಚು ಮಂದಿಯನ್ನು ‘ಸ್ಥಳಾಂತರಿತ’, 59 ಸಾವಿರಕ್ಕೂ ಹೆಚ್ಚು ಮಂದಿಯನ್ನು ‘ಗೈರು’ ಹಾಗೂ 30 ಸಾವಿರಕ್ಕೂ ಹೆಚ್ಚು ಮಂದಿಯನ್ನು ‘ಡುಪ್ಲಿಕೇಟ್’ ಎಂದು ಗುರುತಿಸಲಾಗಿದೆ. ವಿಜಯಪುರ ನಗರ ಕ್ಷೇತ್ರವೊಂದರಲ್ಲೇ 79,737 ಮತದಾರರು ಹೊರಗುಳಿದಿದ್ದಾರೆ. ಅರ್ಹ ಮತದಾರರ ಹೆಸರುಗಳನ್ನು ಸಮರ್ಪಕ ಪರಿಶೀಲನೆ ಮತ್ತು ಅವಕಾಶವಿಲ್ಲದೆ ಕೈಬಿಡಬಾರದು, ‘Absent’, ‘Shifted’ ಹಾಗೂ ‘Logical Discrepancy’ ಪ್ರಕರಣಗಳಿಗೆ ಸ್ಪಷ್ಟತೆ ನೀಡಬೇಕು ಮತ್ತು ಕ್ಷೇತ್ರವಾರು ಅಂಕಿಅಂಶಗಳನ್ನು ಸಾರ್ವಜನಿಕಗೊಳಿಸಬೇಕು ಎಂದು ಮತ ಕಾವಲು ಸಮಿತಿ ಆಗ್ರಹಿಸಿದೆ.

15 ನಿಮಿಷಗಳ ಹಿಂದೆ 4
Ad
ಸಂಪಾದಕರು

ಇತ್ತೀಚಿನ ಸುದ್ದಿಗಳು

Latest updates
ರಾಜ್ಯ· 4 ದಿನಗಳ ಹಿಂದೆ

ಅಂಜುಮನ್ ಏ ಇಸ್ಲಾಂ ಕಮಿಟಿಯ ಮೂಲ ಉದ್ದೇಶ ಮಾನವ ಹಕ್ಕುಗಳ ರಕ್ಷಣೆ ಮತ್ತು ಶೈಕ್ಷಣಿಕ ಪ್ರಗತಿ: ಮಹೇಬೂಬ ಮುಲ್ಲಾ

ಅಂಜುಮನ್ ಏ ಇಸ್ಲಾಂ ಕಮಿಟಿಯನ್ನು ಹಿರಿಯರು ಸಮುದಾಯದ ಶೈಕ್ಷಣಿಕ, ಸಾಮಾಜಿಕ ಹಾಗೂ ಆರ್ಥಿಕ ಅಭಿವೃದ್ಧಿ ಮತ್ತು ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕಾಗಿ ಸ್ಥಾಪಿಸಿದ್ದರು. ಆದರೆ ಹಲವು ವರ್ಷಗಳ ಕಾಲ ಕಮಿಟಿ ರಚನೆಯಾಗದೆ ಸಂಸ್ಥೆಯ ಅಭಿವೃದ್ಧಿಗೆ ಹಿನ್ನಡೆಯಾಗಿದೆ. 2018ರಲ್ಲಿ ಕಮಿಟಿ ರಚನೆಯಾದರೂ, 2021ರ ಬಳಿಕ ಮತ್ತೆ ಆಡಳಿತಾತ್ಮಕ ಸಮಸ್ಯೆಗಳಿಂದ ಸಂಸ್ಥೆಯ ಪ್ರಗತಿ ಕುಂಠಿತವಾಯಿತು. ಈ ಹಿನ್ನೆಲೆಯಲ್ಲಿ ಅಂಜುಮನ್ ಹಿತರಕ್ಷಣಾ ಸಮಿತಿ ಮೂರು ವರ್ಷಗಳ ಕಾಲ ಹೋರಾಟ ನಡೆಸಿ ಚುನಾವಣೆ ನಡೆಯುವಂತೆ ಮಾಡಿತು. ಚುನಾವಣೆ ನಡೆದಿದ್ದರೂ, ಕೆಲವು ಅಭ್ಯರ್ಥಿಗಳ ಸ್ಪರ್ಧೆ ಮತ್ತು ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಎರಡು ಪ್ರಕರಣಗಳು ನ್ಯಾಯಾಲಯದಲ್ಲಿರುವುದರಿಂದ ಚುನಾಯಿತ ಅಭ್ಯರ್ಥಿಗಳಿಗೆ ಇನ್ನೂ ಪ್ರಮಾಣಪತ್ರ ದೊರೆತಿಲ್ಲ. ಈ ಪ್ರಕರಣಗಳ ಅಂತಿಮ ತೀರ್ಪಿಗೆ ಒಳಪಟ್ಟೇ ಚುನಾವಣಾ ಫಲಿತಾಂಶ ಮಾನ್ಯವಾಗಲಿದೆ ಎಂದು ಚುನಾವಣಾಧಿಕಾರಿ ಸ್ಪಷ್ಟಪಡಿಸಿದ್ದಾರೆ. ಸಂಸ್ಥೆಯ ಅಭಿವೃದ್ಧಿಗೆ ಭಿನ್ನಾಭಿಪ್ರಾಯಗಳು ಮತ್ತು ವೈಯಕ್ತಿಕ ಹಿತಾಸಕ್ತಿಗಳು ಅಡ್ಡಿಯಾಗಬಾರದು. “ನಾನು” ಎನ್ನುವ ಮನೋಭಾವ ಬಿಟ್ಟು “ನಾವು” ಎನ್ನುವ ಮನೋಭಾವದಿಂದ ಸಮುದಾಯದ ಹಿತಕ್ಕಾಗಿ ಕೆಲಸ ಮಾಡಬೇಕು ಎಂದು ಮಹೇಬೂಬ ಮುಲ್ಲಾ ಕರೆ ನೀಡಿದ್ದಾರೆ. ಸುಮಾರು ಮೂರು ದಶಕಗಳ ನಿರ್ಲಕ್ಷ್ಯದಿಂದ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯಕ್ಕೆ ಹಿನ್ನಡೆಯಾಗಿದೆ. ಆದ್ದರಿಂದ ಅಂಜುಮನ್ ಸಂಸ್ಥೆಯನ್ನು ಉಳಿಸಿ, ಶೈಕ್ಷಣಿಕವಾಗಿ ಸಮುದಾಯವನ್ನು ಮುನ್ನಡೆಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಸಂಸ್ಥೆಯ ಭವಿಷ್ಯ ಉಳಿಸುವುದೇ ಮುಂದಿನ ಪೀಳಿಗೆಯ ಭವಿಷ್ಯವನ್ನು ರಕ್ಷಿಸುವುದಾಗಿದೆ ಎಂಬುದು ವರದಿಯ ಪ್ರಮುಖ ಸಂದೇಶವಾಗಿದೆ.

ರಾಜ್ಯ· 5 ದಿನಗಳ ಹಿಂದೆ

15,000 ಶಿಕ್ಷಕರ ನೇಮಕಾತಿಯಲ್ಲಿ ಉರ್ದು ಮಾಧ್ಯಮಕ್ಕೆ ಅನ್ಯಾಯ ಆರೋಪ: ನಿಯಮ ಮರುಪರಿಶೀಲನೆಗೆ ಆಗ್ರಹ

ಕರ್ನಾಟಕ ಸರ್ಕಾರದ ವತಿಯಿಂದ ಪ್ರಕಟಿಸಿರುವ ಸುಮಾರು 15,000 ಶಿಕ್ಷಕರ ನೇಮಕಾತಿ ಪ್ರಕ್ರಿಯೆಯಲ್ಲಿನ ಹೊಸ ನಿಯಮಗಳು ಉರ್ದು ಮಾಧ್ಯಮದ ವಿದ್ಯಾರ್ಥಿಗಳು ಹಾಗೂ ಶಿಕ್ಷಕ ಹುದ್ದೆಯ ಉದ್ಯೋಗಾಕಾಂಕ್ಷಿಗಳಿಗೆ ಅನ್ಯಾಯ ಉಂಟುಮಾಡಲಿವೆ ಎಂಬ ಆರೋಪ ಕೇಳಿಬಂದಿದೆ. GPSTR, HSTR ಮತ್ತು PSTR ಹುದ್ದೆಗಳ CET ಪರೀಕ್ಷೆಯಲ್ಲಿ ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಮಾತ್ರ ಪ್ರಶ್ನೆಪತ್ರಿಕೆ ನೀಡುವ ನಿರ್ಧಾರವನ್ನು ಮರುಪರಿಶೀಲಿಸಿ, ಉರ್ದು ಭಾಷೆಯಲ್ಲಿಯೂ ಪ್ರಶ್ನೆಪತ್ರಿಕೆ ಒದಗಿಸಬೇಕು ಎಂಬ ಆಗ್ರಹ ವ್ಯಕ್ತವಾಗಿದೆ. ಅದೇ ರೀತಿ, ಸುಮಾರು 15,000 ಶಿಕ್ಷಕರ ಹುದ್ದೆಗಳಲ್ಲಿ ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮ ಶಾಲೆಗಳಿಗೆ ಅವಕಾಶ ಕಲ್ಪಿಸಲಾಗಿದ್ದು, ಉರ್ದು ಮಾಧ್ಯಮ ಶಾಲೆಗಳಿಗೆ ಸಮರ್ಪಕ ಅವಕಾಶ ನೀಡದಿರುವುದು ಉರ್ದು ಮಾಧ್ಯಮ ಶಿಕ್ಷಣದ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಕರ್ನಾಟಕ ನದಾಫ ಪಿಂಜಾರ ಸಂಘದ ರಾಜ್ಯ ಸದಸ್ಯ ತಾಜುದ್ದೀನ ಕರಜಗಿ ಹೇಳಿದ್ದಾರೆ.

ರಾಜ್ಯ· 6 ದಿನಗಳ ಹಿಂದೆ

ಮುದ್ದೇಬಿಹಾಳ ಅಂಜುಮನ್ ಇಸ್ಲಾಂ ಕಮಿಟಿ ಚುನಾವಣೆಯಲ್ಲಿ ಮತದಾರರ ತೀರ್ಪು ಸ್ವೀಕರಿಸಿದ ಅಂಜುಮನ್ ಹಿತರಕ್ಷಣಾ ಬಣದ ಅಭ್ಯರ್ಥಿಗಳು

ಮುದ್ದೇಬಿಹಾಳ ಅಂಜುಮನ್ ಇಸ್ಲಾಂ ಕಮಿಟಿಯ ಚುನಾವಣೆಯಲ್ಲಿ ಮತದಾರರು ನೀಡಿದ ತೀರ್ಪನ್ನು ಅಂಜುಮನ್ ಹಿತರಕ್ಷಣಾ ಬಣದ ಅಭ್ಯರ್ಥಿಗಳು ಗೌರವದಿಂದ ಸ್ವೀಕರಿಸಿದ್ದಾರೆ. ಕಳೆದ ಮೂರು ವರ್ಷಗಳಿಂದ ಸಂಸ್ಥೆಯ ಅಭಿವೃದ್ಧಿ ಹಾಗೂ ಸಮುದಾಯದ ಹಿತಕ್ಕಾಗಿ ಹೋರಾಟ ನಡೆಸಿಕೊಂಡು ಬಂದಿರುವ ಬಣದ ಮುಖ್ಯಸ್ಥ ಮಹೇಬೂಬ ಮುಲ್ಲಾ ಟಾಪ್ ಇನ್ ಟೌನ್ ಅವರು, ಅಂಜುಮನ್ ಸಂಸ್ಥೆಯನ್ನು ಶೈಕ್ಷಣಿಕವಾಗಿ ಬಲಪಡಿಸುವುದು, ಆಸ್ತಿಗಳ ಸಮರ್ಪಕ ನಿರ್ವಹಣೆ, ಅಪೂರ್ಣ ಕಾಮಗಾರಿಗಳ ಪೂರ್ಣಗೊಳಿಸುವಿಕೆ ಹಾಗೂ ಆರ್ಥಿಕ ಸಂಪನ್ಮೂಲಗಳ ಸದ್ಬಳಕೆ ಮುಂದಿನ ಪ್ರಮುಖ ಆದ್ಯತೆಗಳಾಗಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.

ರಾಜ್ಯ· 8 ದಿನಗಳ ಹಿಂದೆ

ವಿಜಯಪುರ ಸರ್ಕಾರಿ ವೈದ್ಯಕೀಯ ಕಾಲೇಜಿನ DPRಗೆ ಮಂಜೂರಾತಿ: ನೋಂದಣಿ ಪ್ರಕ್ರಿಯೆಯೂ ಪೂರ್ಣ ಮುಂದಿನ ಶೈಕ್ಷಣಿಕ ವರ್ಷದಿಂದಲೇ ಪ್ರವೇಶ ಪ್ರಕ್ರಿಯೆ ಆರಂಭಿಸಲು ಹೋರಾಟ ಸಮಿತಿ ಆಗ್ರಹ

ವಿಜಯಪುರ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗಾಗಿ ನಡೆದ 116 ದಿನಗಳ ಪಕ್ಷಾತೀತ ಹಾಗೂ ಜಾತ್ಯತೀತ ಜನಹೋರಾಟಕ್ಕೆ ಇದೀಗ ಮಹತ್ವದ ಫಲ ದೊರೆತಿದೆ. ಕಾಲೇಜಿನ DPR ಸಿದ್ಧಗೊಂಡು ಸರ್ಕಾರಕ್ಕೆ ಸಲ್ಲಿಕೆಯಾಗಿದ್ದು, ಮಂಜೂರಾತಿ ದೊರೆತಿದೆ. ಅಧಿಕೃತ ನೋಂದಣಿ ಪ್ರಕ್ರಿಯೆಯೂ ಪೂರ್ಣಗೊಂಡಿದೆ. ಹೀಗಾಗಿ ಮುಂದಿನ ಶೈಕ್ಷಣಿಕ ವರ್ಷದಿಂದಲೇ ವಿದ್ಯಾರ್ಥಿಗಳ ಪ್ರವೇಶ ಪ್ರಕ್ರಿಯೆ ಆರಂಭಿಸುವ ನಿಟ್ಟಿನಲ್ಲಿ ಕಟ್ಟಡ ನಿರ್ಮಾಣ ಮತ್ತು ಇತರ ಅಗತ್ಯ ಕಾರ್ಯಗಳನ್ನು ತ್ವರಿತಗತಿಯಲ್ಲಿ ಕೈಗೊಳ್ಳಬೇಕೆಂದು ಹೋರಾಟ ಸಮಿತಿ ಸರ್ಕಾರವನ್ನು ಒತ್ತಾಯಿಸಿದೆ.

ರಾಜ್ಯ· 15 ದಿನಗಳ ಹಿಂದೆ

ಮುದ್ದೇಬಿಹಾಳ ಅಂಜುಮನ್ ಏ ಇಸ್ಲಾಂ ಕಮಿಟಿ ಚುನಾವಣೆ: ಅಭಿವೃದ್ಧಿಯ ಹಸ್ತಗಳಿಗೆ ಬಲಪಡಿಸಿ

ಮುದ್ದೇಬಿಹಾಳ ಅಂಜುಮನ್ ಏ ಇಸ್ಲಾಂ ಕಮಿಟಿಯ ಚುನಾವಣೆ ಸಮುದಾಯದಲ್ಲಿ ಭಾರಿ ಹುಮ್ಮಸ್ಸು ಮೂಡಿಸಿದ್ದು, ಹಲವು ವರ್ಷಗಳ ಬಳಿಕ ದೊರೆತಿರುವ ಈ ಅವಕಾಶ ಸಂಸ್ಥೆಯ ಮುಂದಿನ ಭವಿಷ್ಯವನ್ನು ನಿರ್ಧರಿಸುವ ಮಹತ್ವದ ಘಟ್ಟವಾಗಿದೆ. ಸಂಬಂಧ, ಸ್ನೇಹ ಹಾಗೂ ವೈಯಕ್ತಿಕ ಪರಿಚಯಗಳಿಗಿಂತ ಸತ್ಯ, ನ್ಯಾಯ, ಪ್ರಾಮಾಣಿಕತೆ, ಪಾರದರ್ಶಕತೆ, ಆಡಳಿತಾತ್ಮಕ ತಿಳುವಳಿಕೆ ಮತ್ತು ಅನುಭವ ಹೊಂದಿರುವ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕು ಎಂಬ ಅಭಿಪ್ರಾಯ ಸಮುದಾಯದ ವಲಯದಲ್ಲಿ ಕೇಳಿಬರುತ್ತಿದೆ.

ರಾಜ್ಯ· 25 ದಿನಗಳ ಹಿಂದೆ

ಟಾಪ್ ಇನ್ ಟೌನ್ ಮುಲ್ಲಾ ನೇತೃತ್ವದ ಅಂಜುಮನ್ ಹಿತರಕ್ಷಣಾ ಬಣದಿಂದ ಮುದ್ದೇಬಿಹಾಳ ಅಂಜುಮನ್ ಇಸ್ಲಾಂ ಕಮಿಟಿಯ ಚುನಾವಣೆ–2026 ಅಭ್ಯರ್ಥಿಗಳ ಅಂತಿಮ ಪಟ್ಟಿ ಪ್ರಕಟ.

ಮುದ್ದೇಬಿಹಾಳ ಅಂಜುಮನ್ ಇಸ್ಲಾಂ ಕಮಿಟಿಯ ಚುನಾವಣೆ–2026ರ ಅಭ್ಯರ್ಥಿಗಳ ಅಂತಿಮ ಪಟ್ಟಿ ಪ್ರಕಟಗೊಂಡ ಹಿನ್ನೆಲೆಯಲ್ಲಿ, ಟಾಪ್ ಇನ್ ಟೌನ್ ಮುಲ್ಲಾ ಅವರ ನೇತೃತ್ವದಲ್ಲಿ ಅಂಜುಮನ್ ಹಿತರಕ್ಷಣಾ ಬಣದ ಮಹತ್ವದ ಸಭೆ ನಡೆಯಿತು. ಸಭೆಯಲ್ಲಿ ವಿವಿಧ ಪಂಗಡಗಳ ಮುಖಂಡರು ಹಾಗೂ ಅಭ್ಯರ್ಥಿಗಳು ಭಾಗವಹಿಸಿ ಸಂಸ್ಥೆಯ ಅಭಿವೃದ್ಧಿ, ಶಿಕ್ಷಣಕ್ಕೆ ಆದ್ಯತೆ, ಪಾರದರ್ಶಕ ಆಡಳಿತ ಹಾಗೂ ಸಮುದಾಯದ ಸೇವೆಯ ಸಂಕಲ್ಪದೊಂದಿಗೆ ಬಣದ ಅಭ್ಯರ್ಥಿಗಳ ಅಂತಿಮ ಪಟ್ಟಿಯನ್ನು ಪ್ರಕಟಿಸಿದರು.

ರಾಜ್ಯ· 26 ದಿನಗಳ ಹಿಂದೆ

ಅಂತು ಇಂತು ಮುದ್ದೇಬಿಹಾಳ ಅಂಜುಮನ್ ಇಸ್ಲಾಂ ಸಂಸ್ಥೆಯ ಚುನಾವಣೆ ಕಣ ರಂಗೇರಿತು: ಅಂತಿಮ ಅಭ್ಯರ್ಥಿಗಳ ಪಟ್ಟಿ ಪ್ರಕಟ

ಮುದ್ದೇಬಿಹಾಳ ಅಂಜುಮನ್-ಇ-ಇಸ್ಲಾಂ ಸಂಸ್ಥೆಯ ಆಡಳಿತ ಮಂಡಳಿ ಚುನಾವಣೆಯ ಅಂತಿಮ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಲಾಗಿದ್ದು, ಚುನಾವಣಾ ಕಣ ಮತ್ತಷ್ಟು ರಂಗೇರಿದೆ. ಅಂಜುಮನ್ ಹಿತರಕ್ಷಣಾ ಸಮಿತಿಯ ಸತತ ಹೋರಾಟದ ಫಲವಾಗಿ ಚುನಾವಣಾ ಪ್ರಕ್ರಿಯೆ ಆರಂಭವಾಗಿರುವುದಕ್ಕೆ ಸಮುದಾಯದ ವಿವಿಧ ವಲಯಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ. ವಿದ್ಯಾವಂತರು, ವೃತ್ತಿಪರರು ಹಾಗೂ ಯುವ ಶಕ್ತಿಯ ಭಾಗವಹಿಸುವಿಕೆಯಿಂದ ಸಂಸ್ಥೆಯ ಅಭಿವೃದ್ಧಿಗೆ ಹೊಸ ದಿಕ್ಕು ದೊರೆಯಲಿದೆ ಎಂಬ ಆಶಾಭಾವನೆ ವ್ಯಕ್ತವಾಗಿದೆ.

ರಾಜ್ಯ· 28 ದಿನಗಳ ಹಿಂದೆ

ಮೀಸಲಾತಿ ಹಟಾವೋ ಆಂದೋಲನ' ಸಂವಿಧಾನಬದ್ಧ ಹಕ್ಕುಗಳ ವಿರುದ್ಧದ ಪ್ರತಿಗಾಮಿ ಪ್ರಯತ್ನ: ದ್ರಾವಿಡ ವಿದ್ಯಾರ್ಥಿ ಪರಿಷತ್ ಖಂಡನೆ

ವಿಜಯಪುರದಲ್ಲಿ ದ್ರಾವಿಡ ವಿದ್ಯಾರ್ಥಿ ಪರಿಷತ್, "ಮೀಸಲಾತಿ ಹಟಾವೋ ಆಂದೋಲನ" ಹೆಸರಿನಲ್ಲಿ ನಡೆಯುತ್ತಿರುವ ಡಿಜಿಟಲ್ ಅಭಿಯಾನವನ್ನು ತೀವ್ರವಾಗಿ ಖಂಡಿಸಿದೆ. ಈ ಅಭಿಯಾನವು ಸಂಸ್ಥೆಗಳ ವೈಫಲ್ಯಗಳಿಂದ ಜನರ ಗಮನವನ್ನು ಬೇರೆಡೆ ಸೆಳೆದು, ಐತಿಹಾಸಿಕವಾಗಿ ಶೋಷಿತ ಸಮುದಾಯಗಳಿಗೆ ಸಂವಿಧಾನ ನೀಡಿರುವ ಮೀಸಲಾತಿ ಹಕ್ಕುಗಳನ್ನು ಪ್ರಶ್ನಿಸುವ ಪ್ರಯತ್ನವಾಗಿದೆ ಎಂದು ಪರಿಷತ್ ಆರೋಪಿಸಿದೆ. ಪರೀಕ್ಷಾ ಅಕ್ರಮಗಳು, ಶಿಕ್ಷಣ ವ್ಯವಸ್ಥೆಯ ವೈಫಲ್ಯ ಹಾಗೂ ಅಂಚಿನ ಸಮುದಾಯಗಳ ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಸಮಗ್ರ ಚರ್ಚೆ ಅಗತ್ಯವೆಂದು ಅದು ಒತ್ತಾಯಿಸಿದೆ.

ರಾಜ್ಯ· 28/7/2026

ಅಂಜುಮನ್ ಪಾರದರ್ಶಕ ಆಡಳಿತ, ಸಂಸ್ಥೆಯ ಅಭಿವೃದ್ಧಿಯೇ ಗುರಿ ಅಭ್ಯರ್ಥಿ ಬಂದೇನವಾಜ ಕುಮಸಿ

ಸಂಸ್ಥೆಯ ಶೈಕ್ಷಣಿಕ, ಧಾರ್ಮಿಕ ಹಾಗೂ ಸಮಾಜಮುಖಿ ಚಟುವಟಿಕೆಗಳಿಗೆ ಹೊಸ ಚೈತನ್ಯ ತುಂಬುವ ಉದ್ದೇಶದಿಂದ ಚುನಾವಣೆಗೆ ಸ್ಪರ್ಧಿಸುತ್ತಿದ್ದು, ಸದಸ್ಯರ ಸಹಕಾರದೊಂದಿಗೆ ಅಂಜುಮನ್ ಸಂಸ್ಥೆಯನ್ನು ಇನ್ನಷ್ಟು ಬಲಿಷ್ಠ ಹಾಗೂ ಅಭಿವೃದ್ಧಿ ಪಥದಲ್ಲಿ ಮುನ್ನಡೆಸುವ ಸಂಕಲ್ಪ ಹೊಂದಿರುವುದಾಗಿ ಅವರು ತಿಳಿಸಿದರು.

ಇನ್ನಷ್ಟು

More stories
ರಾಜ್ಯ
ಜುಲೈ 30ರಂದು ವಿಜಯಪುರದಲ್ಲಿ ನಡೆಯಬೇಕಿದ್ದ NEET ಪೇಪರ್ ಸೋರಿಕೆ ವಿರುದ್ಧ ಪ್ರತಿಭಟನಾ ರ್ಯಾಲಿ ತಾತ್ಕಾಲಿಕವಾಗಿ ಮುಂದೂಡಿಕೆ
28/7/2026
ರಾಜ್ಯ
ಸಿ ಟಿ ರವಿ ಕೋಮು ದ್ವೇಷದ ರಂಪಾಟಕ್ಕೆ ಕೊನೆ ಇಲ್ಲವೆ? ಖಾಸಿಂ ಸಾಬ್. ಎ
28/7/2026
ರಾಜ್ಯ
ಭಾರತದ 'ಮಿಸೈಲ್ ಮ್ಯಾನ್' ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರನ್ನು ಸ್ಮರಿಸುವ ದಿನ – ವಿಜ್ಞಾನ, ಶಿಕ್ಷಣ ಮತ್ತು ಮಾನವೀಯತೆಯ ಅಮರ ಜ್ಯೋತಿ
27/7/2026
ರಾಜ್ಯ
ಕುರುಬ ಸಮುದಾಯ ಎಸ್‌ಟಿ ಸೇರ್ಪಡೆಗೆ ಆಗ್ರಹ: ಆಗಸ್ಟ್ 8 ರಂದು ಫ್ರೀಡಂ ಪಾರ್ಕ್‌ನಲ್ಲಿ ಹೋರಾಟಕ್ಕೆ ಯುವ ನಾಯಕ ವೀರೇಶ ಬಿಸನಾಳ ಕರೆ
25/7/2026
ರಾಜ್ಯ
ನೀಟ್ ಹಗರಣ ಹಾಗೂ ವಿದ್ಯಾರ್ಥಿಗಳ ಮೇಲಿನ ದೌರ್ಜನ್ಯ ಖಂಡಿಸಿ ಜುಲೈ 30ರಂದು ವಿಜಯಪುರದಲ್ಲಿ ಬೃಹತ್ ಪ್ರತಿಭಟನೆ: ಪ್ರಗತಿಪರ ಸಂಘಟನೆಗಳ ಘೋಷಣೆ
25/7/2026
ರಾಜ್ಯ
ಜಂತರ್ ಮಂತರ್‌ನಲ್ಲಿ ಹೋರಾಟಗಾರರ ಮೇಲಿನ ದಬ್ಬಾಳಿಕೆ ಖಂಡಿಸಿ ನಾಳೆ ವಿಜಯಪುರದಲ್ಲಿ ಪತ್ರಿಕಾಗೋಷ್ಠಿ
24/7/2026